ಐಲೇಸಾ ತಂಡದ ಸಂಯೋಜಕರಾದ ಗಾಯಕ ಶ್ರೀ ರಮೇಶ್ ಚಂದ್ರ ಐಲೇಸಾದ ಕಾರ್ಯಕ್ರಮಗಳನ್ನು ಪರಿಚಯಿಸಿದರು.
ಮಣಿಪಾಲ ವಿಶ್ವವಿದ್ಯಾನಿಲಯದ ಅಂಗಸಂಸ್ಥೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ನ ನಿರ್ದೇಶಕರಾದ ಪ್ರೊ. ವರದೇಶ ಹಿರೇಗಂಗೆಯವರು ಗಾಂಧಿಸ್ಮರಣೆಯನ್ನು ನಡೆಸಿಕೊಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರಾದ ಪ್ರೊ. ಡಾ. ಪಿ.ಎಸ. ಯಡಪಡಿತ್ತಾಯರು ತುಳು ಪ್ರೀತಿಯನ್ನು, ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ತುಳು ಕೆಲಸಗಳನ್ನು ಕುರಿತು ಹೇಳಿದರು. ಆಲ್ ಅಮೆರಿಕಾ ತುಳು ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಭಾಸ್ಕರ ಶೇರಿಗಾರ್ ಮಾಳ, ಅಮೆರಿಕಾದಲ್ಲಿ ತುಳುಕೂಟಗಳ ಕುರಿತು ವಿವರಿಸಿ, ಶುಭ ಹಾರೈಸಿದರು.
ಇದರ ಬಳಿಕ ಐಲೇಸಾ - ದ ವಾಯ್ಸ್ ಆಫ್ ಓಷನ್ ತಂಡದಿಂದ “ಐಲೇಸಾ ನಮನ ಗಾನ” - ಗಾಯಕರಾದ ರಮೇಶ್ಚಂದ್ರ, ಡಾ. ಸುಶೀಲಾ ರಾವ್ ಹಾಗೂ ಸುಧಾಕರ ಶೆಟ್ಟಿಯವರ ಸುಮಧುರ ಸ್ವರಗಳಲ್ಲಿ ಸೊಗಸಾದ ತುಳು, ಕನ್ನಡ, ಹಿಂದಿ ಗೀತೆಗಳ ಪ್ರಸ್ತುತಿಯಿತ್ತು.
ಸಂಪಾದಕರಾದ ಡಾ. ಪದ್ಮನಾಭ ಕೇಕುಣ್ಣಾಯರು ಸ್ವಾಗತಿಸಿದರು. ಡಾ. ಸಾಯಿಗೀತಾ ಕಾರ್ಯಕ್ರಮನಿರ್ವಹಣೆ ಮಾಡಿದರು. ಟೆಕ್ನಿಕಲ್ ಲೀಡ್ ಪ್ರದ್ಯೋತ್ ಹೆಗ್ಡೆ ತುಳು ಜ್ಞಾತಿಪದಸಂಚಯದ ಡಿಜಿಟಲ್ ಆವೃತ್ತಿಯನ್ನು ಪರಿಚಯಿಸಿದರು. ಐಲೇಸಾದ ಸಂಯೋಜಕರಾದ ಶ್ರೀ ಶಾಂತಾರಾಮ ಶೆಟ್ಟಿಯವರು ವಂದನಾರ್ಪಣೆ ಮಾಡಿದರು.
ಈ ಕಾರ್ಯಕ್ರಮವು ನಿಟ್ಟೆ ಯೂಟ್ಯೂಬ್ https://tinyurl.com/nittetube ನಲ್ಲಿ ವೀಕ್ಷಣೆಗೆ ಲಭ್ಯವಿದೆ. https://tulu-congnate-dictionary.web.app/main.html ಮೂಲಕ ತುಳುಜ್ಞಾತಿಪದಸಂಚಯದ ಡಿಜಿಟಲ್ ಆವೃತ್ತಿಯನ್ನು ಬಳಸಬಹುದೆಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.
Press release
No comments:
Post a Comment
Note: only a member of this blog may post a comment.